ಅನಂತಾಡಿ: ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ ಮತ್ತು ಕಿಟ್ ವಿತರಣೆ

ಬಂಟ್ವಾಳ: ಅನಂತಾಡಿ ಗ್ರಾಮದಲ್ಲಿ ಲಾಕ್ ಡಾನ್ ನಿಂದ ಕಷ್ಟದಲ್ಲಿ ಇರುವ ಬಡ ಕುಟುಂಬಗಳಿಗೆ ಕಿಟ್ ವಿತರಣೆ ಮತ್ತು ಆಶಾ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮವು ಮಾಜಿ ಸಚಿವ ಬಿ.ರಮನಾಥ ರೈ ರವರ ಸಲಹೆಯಂತೆ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಂತಿ ವಿ.ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು.


ಆಶಾ ಕಾರ್ಯಕರ್ತರಿಗೆ ಗೌರವರ್ಪಣೆ… ಊರಿನ ಜನರಲ್ಲಿ ಕೊವಿಡ್ 19 ಬಗ್ಗೆ ಜಾಗೃತಿ ಮೂಡಿಸಿ ಗ್ರಾಮದ ಆರೋಗ್ಯಕ್ಕಾಗಿ ದುಡಿಯುತ್ತಿರುವ 3 ಜನ ಆಶಾ ಕಾರ್ಯಕರ್ತರನ್ನು ಮಾಜಿ ಸಚಿವ ಬಿ.ರಮನಾಥ ರೈ ಹಣ್ಣು ಹಂಪಲು,ಸ್ಯಾನಿಟರಿ, ಕಿಟ್ ನೀಡಿ ಸಾಲು ಹಾಕಿ ಗೌರವಿಸಿದರು.


ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೇಬಿ ಕುಂದರ್,ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಎ.ಪಿ.ಎಂ.ಸಿ ಅದ್ಯಕ್ಷ ಪದ್ಮನಾಭ ರೈ,ಉಪಾದ್ಯಕ್ಷ ಚಂದ್ರಶೇಖರ್ ಪೂಜಾರಿ,ಜಿ.ಪಂ ಸದಸ್ಯೆ ಮಂಜುಳಾ ಮಾವೆ,ಹಿರಿಯ ಕಾಂಗ್ರೆಸ್ ಮುಖಂಡರಾದ ನಾರಾಯಣ ಸಾಲ್ಯಾನ್,ರಂಜನ್ ಪೂಂಜಾ, ವಲಯ ಕಾಂಗ್ರೆಸ್ ಅದ್ಯಕ್ಷ ಸತೀಶ್ ಪೂಜಾರಿ ಬಾಕಿಲ,
ಸತೀಶ್ ಪೂಜಾರಿ ಮೊದಲಾದವರಿದ್ದರು.