ಅನಂತಾಡಿ: ಕೋಷ್ಟಲ್ ಸಂಸ್ಥೆ ಯಿಂದ ಕಿಟ್ ಕೊಡುಗೆ

ಬಂಟ್ವಾಳ: ಅನಂತಾಡಿ ಗ್ರಾಮದ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ಕೋಸ್ಟಲ್ ಸಂಸ್ಥೆಯ ಮಾಲೀಕರಾದ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಅನಂತಾಡಿಯ 180 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.


ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ತುಂಬೆ ಕಾಲೇಜು ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, ನಾರಾಯಣ ಸಾಲ್ಯಾನ್ ನೇತೃತ್ವ ವಹಿಸಿದ್ದರು.
ಬಿ.ಎ.ಎಸ್.ಎಫ್ ಸಂಸ್ಥೆಯ ನಿವೃತ ಮುಖ್ಯಸ್ಥ ಪುರಂದರ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪುರಂದರ ಗೌಡ ತಾಳಿಪಡ್ಪು, ಅನಂತಾಡಿ ವಲಯ ಕಾಂಗ್ರೆಸ್ ಅದ್ಯಕ್ಷ ಸತೀಶ್ ಬಾಕಿಲ,ನಾರಾಯಣ,ಸುಂದರ,ಪ್ರಸಾದ್,ನವೀನ್,ಆನಂದ,ವಿಠಲ,ಕೃಷ್ಣಪ್ರಸಾದ್ ರೈ,ಮೊನಪ್ಪ ಗೌಡ ಮೊದಲಾದವರಿದ್ದರು.