ಹಿಂದಿನ ಯೋಜನೆಗಳನ್ನೇ ಮುಂದುವರಿಸಿದ ಡಮ್ಮಿ ಬಜೆಟ್ :ಪ್ರಭಾಕರ ಪ್ರಭು ಟೀಕೆ (ವರದಿ:ಗೋಪಾಲ ಅಂಚನ್,ಯುವಧ್ವನಿ ನ್ಯೂಸ್ ಕರ್ನಾಟಕ)

ಬಂಟ್ವಾಳ: ಯಾವುದೇ ವಿಶೇಷ ಘೋಷಣೆಗಳಿಲ್ಲದ, ಮೂಗಿಗೆ ತುಪ್ಪ ಸವರುವ,ಗ್ಯಾರಂಟಿ ಯೋಜನೆಗಳಿಂದ ಪಾರಾಗುವುದಕ್ಕೆ ಸೀಮಿತವಾಗಿರುವ,ಹಳೆಯ ಯೋಜನೆಗಳನ್ನೇ ಮುಂದುವರಿಸಿರುವ ಬಜೆಟ್ ಆಗಿದ್ದು, ಯಾವುದೇ ತೆರಿಗೆ ಕಡಿತ ಮಾಡದೇ, ಎಲ್ಲದ್ದಕ್ಕೂ ಇನ್ನಷ್ಟು ತೆರಿಗೆ ಏರಿಕೆ ಮಾಡಿರುವುದು ವಿಷಾದನಿಯ. ಸರಕಾರಿ ನೌಕರರ ಬಹುನಿರೀಕ್ಷಿತ ವೇತನ ಆಯೋಗ ವರದಿ ಜಾರಿ ಪ್ರಸ್ತಾಪ ಇಲ್ಲದೆ ಕನಸಾಗಿ ಉಳಿದಿದೆ ಎಂದು ಸಿದ್ದಕಟ್ಟೆ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಟೀಕಿಸಿದ್ದಾರೆ.

ಅಲ್ಪಸಂಖ್ಯಾತರ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದುದಲ್ಲದೇ ಬೇರೆ ಹೊಸತೇನು ಕಾಣದ ಹಳೆಯ ಬಜೆಟ್ ನಂತಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.