ಫೆಬ್ರವರಿ 25ರಂದು ಅಂಗಡಿಪಲ್ಕೆಯಲ್ಲಿ ದೈವಗಳಿಗೆ ಪರ್ವಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ದೈವಗಳಿಗೆ ನೇಮೋತ್ಸವ( ವರದಿ:ಗೋಪಾಲ ಅಂಚನ್,ಯುವಧ್ವನಿ ನ್ಯೂಸ್, ಕರ್ನಾಟಕ)

ಬಂಟ್ವಾಳ: ಜೋಡ್ತಲಕಟ್ಟೆ ದೈವದ ಸೇವಾ ಸಮಿತಿ ಹಾಗೂ ಮಂಜುಶ್ರೀ ಫ್ರೆಂಡ್ಸ್ ಅಂಗಡಿಪಲ್ಕೆಆಶ್ರಯದಲ್ಲಿ ಫೆಬ್ರವರಿ 25ರಂದು ಅಂಗಡಿಪಲ್ಕೆಯಲ್ಲಿ ದೈವಗಳಿಗೆ ಪರ್ವಪೂಜೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ದೈವಗಳಿಗೆ ನೇಮೋತ್ಸವ ವೈಭವಯುತವಾಗಿ ಸಂಪನ್ನಗೊಳ್ಳಲಿದೆ.

Him


ಬೆಳಿಗ್ಗೆ 7ರಿಂದ ಅಂಗಡಿಪಲ್ಕೆಯ ಜೋಡ್ತಾಲಕಟ್ಟೆಯಲ್ಲಿ ದೇವತಾ ಪ್ರಾರ್ಥನೆ, ದೈವಗಳಿಗೆ ಪರ್ವಪೂಜೆ, ಸಾರಿ ಹಾಕಿ ಗೊನೆ ಕಡಿಯುವುದು, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಅಪರಾಹ್ನ 3ಕ್ಕೆ ಪಿಲಿಮೊಗರು ಗುತ್ತಿನಿಂದ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ ಹೊರಡುವುದು, ರಾತ್ರಿ 8ರಿಂದ ಕೊಡಮಣಿತ್ತಾಯ, ರಕ್ತೇಶ್ವರೀ-ಮೈಸಂದಾಯ, ಕಲ್ಕುಡ-ಕಲ್ಲುರ್ಟಿ, ಕಲ್ಲುರ್ಟಿ-ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.
ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ‌.
ಆ ಪ್ರಯುಕ್ತ ಭಕ್ತಾದಿಗಳೆಲ್ಲರೂ ಆಗಮಿಸಿ ತನು-ಮನ-ಧನಗಳಿಂದ ಸಹಕರಿಸಿ, ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ದೈವದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿ ಪ್ರಕಟಣೆ ತಿಳಿಸಿದೆ.