ದರ್ಬೆ ದೇವಿಪುರ ಶ್ರೀ ಆದಿಶಕ್ತಿ ರಾಜ ಚಾಮುಂಡೇಶ್ವರೀ ಕ್ಷೇತ್ರ, ಅಗಸ್ತ್ಯ ಪೀಠ-ಫೆಬ್ರವರಿ 22ರಂದು ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಪ್ರತಿಷ್ಠೆ (ಗೋಪಾಲ ಅಂಚನ್, ಯುವಧ್ವನಿ ನ್ಯೂಸ್ ಕರ್ನಾಟಕ????)

ಬಂಟ್ವಾಳ: ಅಗ್ರಾರ್ ಸಮೀಪದ ದರ್ಬೆ ದೇವಿಪುರ ಶ್ರೀ ಆದಿಶಕ್ತಿ ರಾಜಚಾಮುಂಡೇಶ್ವರೀ ಕ್ಷೇತ್ರ, ಅಗಸ್ತ್ಯ ಪೀಠದಲ್ಲಿ ಫೆಬ್ರವರಿ 22ರಂದು ಬೆಳಿಗ್ಗೆ 11ಗಂಟೆಗೆ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಆದಿಶಕ್ತಿ ರಾಜಚಾಮುಂಡೇಶ್ವರೀ ದೇವಿಯ ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಪ್ರತಿಷ್ಠೆ ನಡೆಯಲಿದೆ.


ನಿಪ್ಪಾಣಿ ಸದ್ಧರ್ಮ ಓಂ ಶಕ್ತಿ ಪೀಠ ಮಹಾಕಾಳಿ ಮಹಾಸಂಸ್ಥಾನಂನ ಪೀಠಾಧಿಪತಿ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ


ಕ್ಷೇತ್ರದ ಧರ್ಮದರ್ಶಿ ವಿಶ್ವನಾಥ ಕರ್ಕೇರಾ ಮತ್ತು ದೇವಿ ಉಪಾಸಕರಾದ ರಂಜಿತಾ ತಿಳಿಸಿದ್ದಾರೆ
ಬೆಳಿಗ್ಗೆ 7 ರಿಂದ ಪ್ರಾರ್ಥನೆ, ಗಣಹೋಮ, ನಾಗಬನದಲ್ಲಿ ತಂಬಿಲ ಸೇವೆ, ಷಡಾಧಾರ ಪ್ರತಿಷ್ಠಾ ಕಾರ್ಯಕ್ರಮಗಳು, ಭಜನಾ ಸಂಕೀರ್ತಣೆ, ಅನ್ನದಾನ‌ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಅಗ್ರಾರ್ ದರ್ಬೆ ದೇವಿಪುರ ಎಂಬಲ್ಲಿ ಆಗಸ್ತ್ಯ ಮುನಿಗಳಿಂದ ಸ್ಥಾಪಿಸಲ್ಪಟ್ಟ ಅಪರೂಪದ ದೈವೀ ತಾಣ ಶ್ರೀ ಆದಿಶಕ್ತಿ ರಾಜಚಾಮುಂಡೇಶ್ವರೀ ಕ್ಷೇತ್ರವನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಗಳೆಲ್ಲವೂ ಯಶಸ್ವಿಯಾಗಲು ಭಕ್ತಾದಿಗಳು ಪೂರ್ಣ ರೀತಿಯ ಸಹಕಾರ ನೀಡಿ ಶ್ರೀ ದೇವಿಯ ಕಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
????????????????????????????