ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನಾಚರಣೆ

ಬಂಟ್ವಾಳ: ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯವರ ಆದೇಶದ ಮೇರೆಗೆ 139ನೇ ವರ್ಷದ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.


ಬಂಟ್ವಾಳ ಪುರಸಭಾ ಸದಸ್ಯರಾದ ಜನಾರ್ದನ ಚೆಂಡ್ತಿಮಾರ್ ರವರು ಧ್ವಜಾರೋಹಣ ಮಾಡುವ ಮುಖಾಂತರ ಕಾರ್ಯಕರ್ಮಕ್ಕೆ ಚಾಲನೆಯನ್ನು ಕೊಟ್ಟರು.
ಬೇಬಿ ಕುಂದರ್ ಮಾತಾಡಿ ಭಾರತ ದೇಶ ವಿದೇಶಿಯರ ಕೈಯಲ್ಲಿ ಸಿಕ್ಕಿ ನರಳಾಡುತ್ತಿರುವ ಸಂದರ್ಭದಲ್ಲಿ ಅನೇಕ ಹಿರಿಯ ಮುಖಂಡರು ಸೇರಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅನೇಕ ಹೋರಾಟ ಚಳುವಳಿಯನ್ನು ನಡೆಸಿ 1947 ರಲ್ಲಿ ಸ್ವಾತಂತ್ಯ ಸಿಗುವಂತಾಯಿತು. ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಮತ್ತು ಶೋಷಿತ ವರ್ಗಕ್ಕೆ ಶಕ್ತಿಯನ್ನು ನೀಡುವಂತಹ ಕಾರ್ಯಕ್ರಮವನ್ನು ಹಾಕಿ ಕಾಂಗ್ರೆಸ್ ಪಕ್ಷ ಕಳೆದ 138 ವರ್ಷಗಳ ಕಾಲ ಈ ದೇಶದಲ್ಲಿ ಬಲಿಷ್ಠವಾಗಿ ಮತ್ತು ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿದ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಮುಂದೆಯೂ ಈ ದೇಶದ ಭದ್ರತೆಗೋಸ್ಕರ ಈ ದೇಶದ ಭವಿಷ್ಯಗೋಸ್ಕರ ಖಂಡಿತವಾಗಿಯೂ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ಸಿದ್ದವಾಗಿದೆ ಎಂದರು.
ಜನಾರ್ದನ ಚೆಂಡ್ತೀಮಾರ್ ಮಾತನಾಡಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹುಟ್ಟಿದಂತಹ ಕಾಂಗ್ರೆಸ್ ಪಕ್ಷ ಇವತ್ತು ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯತ್ವವನ್ನು ಹೊಂದಿದೆ ಎಂದು ಹೇಳಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಮಹಾಬಲ ಬಂಗೇರ ವಂದಿಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ತುಂಬೆ, ಪ್ರವೀಣ್ ಕಿಣಿ,ವೆಂಕಪ್ಪ ಪೂಜಾರಿ,ಪದ್ಮನಾಭ ಬಡ್ಡಕಟ್ಟೆ , ವಿಜಯ ಅಲ್ಲಿಪಾದೆ,ರಾಜೀವ್ ಕಕ್ಕೆಪದವು, ಅಮ್ಮು ಅರ್ಬಿಗುಡ್ಡೆ, ರಿಯಾಜ್ ಕೆಳಗಿನಪೇಟೆ,ಚಿಕ್ಕ ಅರ್ಬಿಗುಡ್ಡೆ,ವಲಾರ್ ಬಡ್ಡಕಟ್ಟೆ,ನವಾಜ್ ಕೆಳಗಿನಪೇಟೆ,ಪುರುಷೋತ್ತಮ್ ಮಂಡಾಡಿ,ಆಶ್ರಿತ್ ಬಂಗೇರ ಪಂಜಿಕಲ್ಲು,ನಾಸೀರ್ ಕೆಳಗಿನಪೇಟೆ ಉಪಸ್ಥಿತರಿದ್ದರು.
———–(++++++)—————
ಗೋಪಾಲ ಅಂಚನ್
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ: 9449104318