ಎ.16ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್-12 ತಂಡಗಳ ಹಾಸ್ಯ ಪ್ರದರ್ಶನ

ಬಂಟ್ವಾಳ: ತುಳುಕೂಟ ಬಂಟ್ವಾಳ ಹಾಗೂ ವಿ4 ನ್ಯೂಸ್ ಆಶ್ರಯದಲ್ಲಿ ಕಾಮಿಡಿ ಲೀಗ್ ಸೀಸನ್ 4ರ ಎರಡನೇ ಸುತ್ತಿನ ಪ್ರದರ್ಶನವು ಎ.16ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ತುಳುಕೂಟ ಬಂಟ್ವಾಳದ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.


ಸ್ಪರ್ಶಾ ಕಲಾಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳುಕೂಟ ಬಂಟ್ವಾಳವು ಈಗಾಗಲೇ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಇದೀಗ ವಿ4 ನ್ಯೂಸ್ ಸಹಭಾಗಿತ್ವದೊಂದಿಗೆ ಹಾಸ್ಯ ಪ್ರದರ್ಶನವನ್ನು ಆಯೋಜಿಸಿದೆ. ಈ ಪ್ರದರ್ಶನದಲ್ಲಿ 12 ಹಾಸ್ಯ ತಂಡಗಳು ಭಾಗವಹಿಸಲಿದೆ ಎಂದರು.


ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉದ್ಘಾಟಿಸುವರು. ಉದ್ಯಮಿ ನಾಗೇಂದ್ರ ಬಾಳಿಗಾ, ಡಾ.ಸುದೀಪ್ ಕುಮಾರ್ ಸಿದ್ದಕಟ್ಟೆ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿ, ಶಿಲ್ಪಾ ಗೊಂಬೆ ಬಳಗದ ರಮೇಶ್ ಕಲ್ಲಡ್ಕ, ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಅವರಿಗೆ ಸನ್ಮಾನ ನಡೆಯಲಿದೆ. ಕುಡ್ಲ ಕುಸಾಲ್, ಜೈ ಮಾತಾ, ತೆಲಿಕೆದ ತೆನಾಲಿ, ಹರಿಣಿ ಕಲಾವಿದರು, ಬಂಗಾರ್ ಬಂಟ್ವಾಳ, ಕಲಾಶ್ರೀ ಕುಡ್ಲ, ವೈಷ್ಣವಿ ಕಲಾವಿದರು, ರಾಜಶ್ರೀ ಕುಡ್ಲ, ಗೋಲ್ಡನ್ ಪೋಪಿ, ತಾಂಬೂಲ ಕಲಾವಿದೆರ್, ಕುಸಾಲ್ ಕಲಾವಿದೆರ್, ವಿಧಾತ್ರಿ ಕಲಾವಿದೆರ್ ತಂಡಗಳು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದೆ ಎಂದು ಸುದರ್ಶನ್ ಜೈನ್ ತಿಳಿಸಿದರು.


ತುಳುಕೂಟದ ಕಾರ್ಯದರ್ಶಿ ಎಚ್ಕೆ. ನಯನಾಡು, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಪದಾಧಿಕಾರಿಗಳಾದ ಸೀತಾರಾಮ ಶೆಟ್ಟಿ, ನಾರಾಯಣ ಸಿ.ಪೆರ್ನೆ, ಸೇಸಪ್ಪ ಮಾಸ್ತರ್, ಸುಕುಮಾರ್ ಬಂಟ್ವಾಳ, ದೇವಿಪ್ರಸಾದ್ ಶೆಟ್ಟಿ, ಪರಮೇಶ್ವರ ಮೂಲ್ಯ, ದಾಮೋದರ ಏರ್ಯ, ವಿ4 ನ್ಯೂಸ್ ನ ಪ್ರೀತೇಶ್, ಹೃಷಿಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವರದಿ: ಗೋಪಾಲ ಅಂಚನ್