ಯುವಸ್ಪಂದನ ಸಂಘಟನೆಯಿಂದ ಪಿಲಿಮೊಗರು ಗ್ರಾಮದ ಅನಿತ ಪೂಜಾರಿಯವರಿಗೆ ಸಹಾಯಧನ ಹಸ್ತಾಂತರ

ಬಂಟ್ವಾಳ: ಯುವಸ್ಪಂದನ ಸಂಘಟನೆ ವತಿಯಿಂದ ಯುವಸ್ಪಂದನ ಸಹಾಯಹಸ್ತದ ಮೂರನೇ ಸರಣಿ ಅಂಗವಾಗಿ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು


ಬಂಟ್ವಾಳ ತಾಲೂಕಿನ ಪಿಲಿಮೊಗರು ಗ್ರಾಮದ ನಡುಪೂರೊಟ್ಟು ಮನೆ ನಿವಾಸಿ ಅನಿತಾ ಪೂಜಾರಿಯವರಿಗೆ ಯುವಸ್ಪಂದನ ಸಂಘಟನೆಯ ಸದಸ್ಯರಿಂದ ಸಂಗ್ರಹಿಸಲಾದ 30 ಸಾವಿರ ರೂಪಾಯಿಯನ್ನು ಸಹಾಯಧನವಾಗಿ ಹಸ್ತಾಂತರಿಸಲಾಯಿತು.
ಯುವಸ್ಪಂದನ ಸಂಘಟನೆಯ ಪ್ರಮುಖರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಹಾಯಧನ ಹಸ್ತಾಂತರಕ್ಕೆ ಸಹಕಾರ ನೀಡಿದ ಸರ್ವಸದಸ್ಯರಿಗೂ ಯುವಸ್ಪಂದನ ಸಂಘಟನೆ ಕೃತಜ್ಞತೆ ಸಲ್ಲಿಸಿದೆ.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318