ಎಪ್ರಿಲ್ 2ರಂದು ಅಜ್ಜಿಬೆಟ್ಟು ಶ್ರೀ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಬಿಂಬ ಪ್ರತಿಷ್ಠಾ ಮಹೋತ್ಸವದ 31ನೇ ವರ್ಧಂತ್ಯುತ್ಸವ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಬಸದಿಯಲ್ಲಿ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಬಿಂಬ ಪ್ರತಿಷ್ಠಾ ಮಹೋತ್ಸವದ 31ನೇ ವರ್ಧಂತ್ಯುತ್ಸವವು ಎಪ್ರಿಲ್ 2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ.


ಬೆಳಿಗ್ಗೆ 9ರಿಂದ ಶ್ರೀ ಆದಿನಾಥ ತೀರ್ಥಂಕರರ ಪ್ರತಿಷ್ಠೆ, ಶ್ರೀ ವೃಷಭಾದಿ -ಅನಂತನಾಥ ತೀರ್ಥಂಕರರ ಆರಾಧನೆ, ಶ್ರೀ ಕ್ಷೇತ್ರಪಾಲ ಪ್ರತಿಷ್ಠೆ, ಅಪರಾಹ್ನ ಆರಾಧನೆ ಹಾಗೂ ಶ್ರೀ ಕ್ಷೇತ್ರಪಾಲ ಪ್ರತಿಷ್ಠೆಯ ಮಹಾಅರ್ಘ್ಯ, ಮಹಾಮಂಗಳಾರತಿ, ಮಹಾಮಾತೆ ಶ್ರೀ ಪದ್ಮಾವತಿ ದೇವಿ ಆರಾಧನೆ, ಸಂಜೆ ಶ್ರೀ ಪದ್ಮಾವತಿ ದೇವಿ ಕಲಾರೋಪಣಪೂರ್ವಕ ಪ್ರತಿಷ್ಠೆ, ಶ್ರೀ ಆದಿನಾಥ ತೀರ್ಥಂಕರರಿಗೆ ೫೪ ಕಲಶಗಳಿಂದ ಮಹಾಭಿಷೇಕ ನಡೆಯಲಿದೆ. ಧರ್ಮಬಂಧುಗಳಾದ ತಾವೆಲ್ಲರೂ ಭಾಗವಹಿಸುವಂತೆ ಬಸದಿಯ ಪ್ರಕಟಣೆ ತಿಳಿಸಿದೆ.

ವರದಿ:ಗೋಪಾಲ ಅಂಚನ್
ಸಂಪಾದಕರು:
ಯುವಧ್ವನಿ ನ್ಯೂಸ್ ಕರ್ನಾಟಕ
ಮೊ:9449104318