ಪೆರ್ನೆ ರಾಮಚಂದ್ರ ಹೈಸ್ಕೂಲಿನಲ್ಲಿ “ಪರೀಕ್ಷಾ ಪೂರ್ವ ಸಿದ್ಧತೆ” ತರಬೇತಿ ಕಾರ್ಯಾಗಾರ

ಬಂಟ್ವಾಳ: ಪೆರ್ನೆ ರಾಮಚಂದ್ರ ಹೈಸ್ಕೂಲಿನಲ್ಲಿ ಬಂಟ್ವಾಳ ರೋಟರಿ ಕ್ಲಬ್, ಇಂಟರಾಕ್ಟ್ ಕ್ಲಬ್ ಮತ್ತು ಜೆಸಿಐ ಮಂಗಳೂರು ವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ “ಪರೀಕ್ಷಾ ಪೂರ್ವ ಸಿದ್ಧತೆ” ತರಬೇತಿ ಕಾರ್ಯಾಗಾರ ನಡೆಯಿತು.


ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳು ಪರೀಕ್ಷೆಯ ಬಗೆಗಿನ ಭಯವನ್ನು ಬಿಡಬೇಕು. ಆತ್ಮವಿಶ್ವಾಸ ಮತ್ತು ಆಸಕ್ತಿಯಿಂದ ಓದುವ ಮೂಲಕ ತಮ್ಮ ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಮುಖ್ಯ ಶಿಕ್ಷಕ ತಾರಾನಾಥ ಶೆಟ್ಟಿ, ಹಿರಿಯ ಶಿಕ್ಷಕ ಚಂದ್ರಹಾಸ ಶೆಟ್ಟಿ, ಇಂಟರ್ಯಾಕ್ಟ್ ಕೋರ್ಡಿನೇಟರ್ ಇಂದಿರಾ ಉಪಸ್ಥಿತರಿದ್ದರು. ಯಕ್ಷಲೋಕ ಲೈಫ್ ಸ್ಕಿಲ್ ಟ್ರೈನಿಂಗ್ ಸೆಂಟರ್ ನಿರ್ದೇಶಕರಾದ ಗೋಪಾಲ ಅಂಚನ್ ಮತ್ತು ಪ್ರತಿಮಾ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ಕಾರ್ಯಾಗಾರ ನಡೆಸಿದರು.