ಕೌಡೋಡಿಗುತ್ತಿನ ಗುರಿಕಾರ ಬಾಬು ಪೂಜಾರಿ ಇನ್ನಿಲ್ಲ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೌಡೇಡಿಗುತ್ತು ಮನೆತನದ ಗುರಿಕಾರ ಬಾಬು ಪೂಜಾರಿ ಕೌಡೋಡಿ( 82)
ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ.


ಐತಿಹಾಸಿಕ ಹಿನ್ನೆಲೆ ಇರುವ ಕೌಡೋಡಿಗುತ್ತಿನ ಮನೆಯ ಗುರಿಕಾರರಾಗಿ, ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ, ವಾಮದಪದವು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಹಲವಾರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಸಕ್ರೀಯರಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದರು.
ಬಿಲ್ಲವ ಸಮುದಾಯದ ಹಿರಿಯರಾಗಿ, ಪ್ರಸಿದ್ಧ ಗುತ್ತು ಮನೆತನದವರಾಗಿ ಬಾಬು ಪೂಜಾರಿ ಹೆಸರುವಾಸಿಯಾಗಿದ್ದರು.
ಮೃತರು ಪತ್ನಿ, ಪುತ್ರರು, ಪುತ್ರಿ ಸಹಿತ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

?️ಗೋಪಾಲ ಅಂಚನ್ ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್, ಕರ್ನಾಟಕ
ಮೊ: 9449104318