ಬಸ್ತಿಕೋಡಿ-ಕುಡಂಬೆಟ್ಟು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ- ಔಷಧಿ ವಿತರಣೆ

ಮಂಗಳೂರು: ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ, ಕುಡಂಬೆಟ್ಟು-ಬಸ್ತಿಕೋಡಿ ಆಶ್ರಯದಲ್ಲಿ
ಕರ್ನಾಟಕ ಕಟ್ಟಡ ಕಾರ್ಮಿಕರ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಂಚಾರಿ ಆರೋಗ್ಯ ಘಟಕದ ವತಿಯಿಂದ ಕಟ್ಟಡ ಕಾರ್ಮಿಕರ ಮತ್ತು ಮನೆಯ ಸದಸ್ಯರ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಶಿಬಿರ ಬಸ್ತಿಕೋಡಿಯಲ್ಲಿ ನಡೆಯಿತು.


ಈ ಶಿಬಿರದಲ್ಲಿ ಅಭಾ ಕಾರ್ಡ್ ಪ್ರತಿಯೊಬ್ಬರಿಗು ಉಚಿತವಾಗಿ ನೋಂದಣಿ ಮಾಡಲಾಯಿತು. ಸಂಚಾರಿ ಆರೋಗ್ಯ ಘಟಕ ಮಂಗಳೂರು ವಿಭಾಗದ ವ್ಯವಸ್ಥಾಪಕ ಅನಂತ್, ಘಟಕದ ವೈದ್ಯೆ ಡಾ ಅನುಶ್ರೀ, ಶುಶ್ರೂಷೆ ಅಶ್ವಿನಿ,ಗ್ರಾಮ ಒನ್ ಎಫ್ ಜಿಎಂ ಪ್ರಕಾಶ್ ಗಟ್ಟಿ, ಪಂಚಾಯತ್ ಉಪಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಪಂಚಾಯತ್ ಸದಸ್ಯ ನವೀನಚಂದ್ರ ಶೆಟ್ಟಿ, ಪ್ರಮುಖರಾದ ಯುವರಾಜ ಆಳ್ವ, ದಿನೇಶ್ ಶೆಟ್ಟಿ, ಕಟ್ಟಡ ಮಾಲೀಕ ಪ್ರವೀಣ್ ಗಟ್ಟಿ, ಸತೀಶ್ ಪೂಜಾರಿ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

?️ಗೋಪಾಲ ಅಂಚನ್ ಆಲದಪದವು
ಸಂಪಾದಕರು
ಯುವಧ್ವನಿ ನ್ಯೂಸ್-ಕರ್ನಾಟಕ
ಮೊ:9449104318