ಇರ್ವತ್ತೂರು ಗ್ರಾಮ ಪಂಚಾಯತ್: ನೂತನ ಅಟಲ್ ಜೀ ಸಭಾಂಗಣ ಲೋಕಾರ್ಪಣೆ

ವಾಮದಪದವು: ಇರ್ವತ್ತೂರು ಗ್ರಾಮ ಪಂಚಾಯತ್ ನ ನೂತನ ಆಟಲ್ ಜೀ ಸಭಾಂಗಣವನ್ನು ಭಾನುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಲೋಕಾರ್ಪಣೆಗೊಳಿಸಿದರು.
ಗ್ರಾಮ ಪಂಚಾಯತಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು 2021-22 ನೇ ಸಾಲಿನ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೆಲಸದ ಆದೇಶವನ್ನು ನೀಡಿದರು.


ನೂತನ ಸಭಾಂಗಣದ ಕೆಲಸವನ್ನು ನಿರ್ವಹಿಸಿದ ಗುತ್ತಿಗೆದಾರ ದಿನೇಶ್ ರೈ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರಾ, ಗ್ರಾಮ ಪಂಚಾಯತಿಯ ಅಧ್ಯಕ್ಷ ಎಂ. ಪಿ. ಶೇಖರ್, ಉಪಾಧ್ಯಕ್ಷೆ ಹರಿಣಾಕ್ಷಿ, ಸದಸ್ಯರಾದ ಶುಭಕರ ಶೆಟ್ಟಿ, ಸುಧೀಂದ್ರ ಶೆಟ್ಟಿ, ಮಾಲತಿ, ಪ್ರಶಾಂತ್ ಜೈನ್ , ವಿಜಯ, ಸುಚಿತ್ರ ಶೆಟ್ಟಿ, ದಯಾನಂದ ಎಸ್, ಕಲ್ಯಾಣಿ, ಗ್ರಾ. ಪಂ ಕಾರ್ಯದರ್ಶಿ ನಾರಾಯಣ ನಾಯ್ಕ್, ತಾ.ಪಂ.ಮಾಜಿ ಸದಸ್ಯ ರಮೇಶ್ ಕುಡುಮೇರು, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರ್ ಮಾರ್ ಮೊದಲಾದವರಿದ್ದರು.
ಅಭಿವೃದ್ಧಿಶೀಲ ಅಧಿಕಾರಿ ಜೋಯಲ್ ಪ್ರಶಾಂತ್ ಸ್ವಾಗತಿಸಿದರು. ಭರತ್ ರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು.